ಅರುಣೋದಯದ ಶುಭ್ರ
ಕಿರಣಗಳಿಲ್ಲದೆ ನಭ
ಉಲ್ಲಾಸದ ಉತ್ಸಾಹದ
ಮಾತುಗಳಿಲ್ಲದೆ ಮನ
ಉದಾಸದ ಛಾಯೆಯ
ಮುಸುಕು ಹೊದ್ದಿತ್ತು...
ತನುವಿನ ’ನಡು’ ನೋವು
ಮನದ ನಡುವೆ ನೆಲೆಯಾಗಿ
ಬಿಸಿಲಿಲ್ಲದೇ.. ಒಣಗದೇ..
ಹಸಿಯಾಗಿ ಕಾಡುತಿರೆ..
ಕಟು ವಾಸನೆ ದಟ್ಟವಾಗಿ
ಗಾಳಿಯಲಿ ತೇಲಿತ್ತು...
ಹಗಲಲ್ಲೂ ಕತ್ತಲಾಗಿತ್ತು
ಮಾತುಗಳು ಮರೆತು
ಮನ ಮೂಕವಾಗಿತ್ತು
ಪಿಸು ಮಾತುಗಳ ಸಿಹಿ
ಕಲರವದ ಸದ್ದಿಲ್ಲದೆ
ಮೌನರಾಗದ ಛಾಯೆ
ಎಲ್ಲೆಡೆ ಹರಡಿತ್ತು...
ತೆರೆಮರೆಗೆ ಸರಿದ ರವಿ
ವಿರಹ ಚಿಂತೆಯಲಿ ಇಳೆ
ಒಡಲಾಗ್ನಿ ದಹಿಸಿ
ಸುಡುತಿರೆ...
ಕಣ್ಣೀರಿನಭಿಷೇಕದಲಿ
ಪ್ರೇಮ ನಿವೇದನೆಯ ಹೊತ್ತು
ಭರದಿಂದ ಸಾಗಿದಳು
ಕ್ಷಿತಿಜದತ್ತ..
ತನ್ನನೇ
ಸಮರ್ಪಿಸಿಕೊಳ್ಳಲು..
ಕಿರಣಗಳಿಲ್ಲದೆ ನಭ
ಉಲ್ಲಾಸದ ಉತ್ಸಾಹದ
ಮಾತುಗಳಿಲ್ಲದೆ ಮನ
ಉದಾಸದ ಛಾಯೆಯ
ಮುಸುಕು ಹೊದ್ದಿತ್ತು...
ತನುವಿನ ’ನಡು’ ನೋವು
ಮನದ ನಡುವೆ ನೆಲೆಯಾಗಿ
ಬಿಸಿಲಿಲ್ಲದೇ.. ಒಣಗದೇ..
ಹಸಿಯಾಗಿ ಕಾಡುತಿರೆ..
ಕಟು ವಾಸನೆ ದಟ್ಟವಾಗಿ
ಗಾಳಿಯಲಿ ತೇಲಿತ್ತು...
ಹಗಲಲ್ಲೂ ಕತ್ತಲಾಗಿತ್ತು
ಮಾತುಗಳು ಮರೆತು
ಮನ ಮೂಕವಾಗಿತ್ತು
ಪಿಸು ಮಾತುಗಳ ಸಿಹಿ
ಕಲರವದ ಸದ್ದಿಲ್ಲದೆ
ಮೌನರಾಗದ ಛಾಯೆ
ಎಲ್ಲೆಡೆ ಹರಡಿತ್ತು...
ತೆರೆಮರೆಗೆ ಸರಿದ ರವಿ
ವಿರಹ ಚಿಂತೆಯಲಿ ಇಳೆ
ಒಡಲಾಗ್ನಿ ದಹಿಸಿ
ಸುಡುತಿರೆ...
ಕಣ್ಣೀರಿನಭಿಷೇಕದಲಿ
ಪ್ರೇಮ ನಿವೇದನೆಯ ಹೊತ್ತು
ಭರದಿಂದ ಸಾಗಿದಳು
ಕ್ಷಿತಿಜದತ್ತ..
ತನ್ನನೇ
ಸಮರ್ಪಿಸಿಕೊಳ್ಳಲು..
ಚಿತ್ರಕೃಪೆ : ಅಂತರ್ಜಾಲ